ಶಾರದ ಪೂಜೆ

ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಅಭಿವ್ಯಕ್ತಿ ವೇದಿಕೆ ಅಡಿಯಲ್ಲಿ ಶಾರದಾ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿನಿ ಶರಣ್ಯ ಹಾಗೂ ತಂಡದವರು ಭಜನಾ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಯಶೋಧರಾ ಬಂಗೇರರ ಬಿದಿರೆ ಆಟ್ರ್ಸ ವತಿಯಿಂದ ಬಹು ಗಾತ್ರದ ಗೊಂಬೆ ಕುಣಿತ ಹಾಗೂ ಬಣ್ಣದ ವೇಷಗಳ ಕುಣಿತ ಎಲ್ಲರನ್ನು ಆಕರ್ಷಿಸಿದವು. ವಿದ್ಯಾರ್ಥಿಗಳು ಸಾಂಪ್ರಾದಾಯಿಕ ಉಡುಗೆ ತೊಡುಗೆಯಲ್ಲಿ ಮಿಂಚಿದರು. ಶಾರದ ಪೂಜೆಯ ಕೊನೆಯಲ್ಲಿ ಪ್ರಸಾದವನ್ನು ವಿತರಿಸಲಾಯಿತು. ಕಾರ್ಯಕ್ರಮನ್ನು ಶ್ರೀರಾಜ್ ಹಾಗೂ ಶ್ರೀರಕ್ಷಾ ಪುನರೂರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೂಡುಬಿದಿರೆ ವಿಜಯವಾಣಿ ಪ್ರತಿನಿಧಿ ಯಶೋಧರ ಬಂಗೇರ, ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಪ್ರೋ ಬಾಲಕೃಷ್ಣ ಶೆಟ್ಟಿ ಮತ್ತು ಸ್ನಾತಕೋತ್ತರ ವಿಭಾಗದ ಸಂಯೋಜಕ ಶ್ರೀನಿವಾಸ್ ಪೆಜತ್ತಾಯ ಹಾಗೂ ಆಳ್ವಾಸ್ ಕೆಫೆಟೇರಿಯಾದ ನಿರ್ವಾಹಕ ನವೀನ್ ಶೆಟ್ಟಿ, ಮೂಡುಬಿದಿರೆಯ ಲೈವ್‍ನ ರಾಘವೇಂದ್ರ ಶೆಟ್ಟಿ ಹಾಗೂ ಮತ್ತಿತ್ತರು ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.